Showing posts with label old songs. Show all posts
Showing posts with label old songs. Show all posts

Saturday, June 8, 2013

banalli oodo megha

||೨|| ಬಾನಲ್ಲಿ ಓಡೋ ಮೇಘಾ
ಗಿರಿಗೋ ನಿಂತಲ್ಲೇ ಯೋಗಾ ||೨||
ಎಲ್ಲುಂಟು ಒಲವಿರದ ಜಾಗ
ಬಾ ಬಾ ಗೆಳೆಯಾ ಬೇಗ

|| ಬಾನಲ್ಲಿ ಓಡೋ ಮೇಘಾ||

ಮುಗಿಲೊಂದು ಮನಸಿನ ಬಿಂಬಾ
ಮುತ್ತಿನಾ ಮಣಿಗಳೆ ತುಂಬಾ
ಎಲ್ಲೋ ದೂರದ ಚುಕ್ಕಿ
ಅದರತ್ತ ಗಿರಿಮುಗಿಲಾ ಹಕ್ಕಿ 

|| ಬಾನಲ್ಲಿ ಓಡೋ ಮೇಘಾ||

ಓ ಮಣ್ಣಲ್ಲಿ ತಾ ಬೇರೂರಿ
ನೆಲತಾಯ ಮೊಲೆಹಾಲ ಹೀರಿ
ಹಸುರಾಗಿ ನಿಂತೀ ಬಾಳು
ಹೇ ಗಾಳಿ ನಿನಗೆ ಸವಾಲು

|| ಬಾನಲ್ಲಿ ಓಡೋ ಮೇಘಾ||

ಬಾನಲ್ಲೇ ಓಡಿದರೂ ಮೇಘಾ
ಮಳೆಗೂ ಮಣ್ಣಲೇ ಜಾಗ
ಅಲ್ಲಿಗೂ ಇಲ್ಲಿಗೂ ಸೇತು
ಮೌನ ಮೌನದ ನಡುವೇ ಮಾತು

|| ಬಾನಲ್ಲಿ ಓಡೋ ಮೇಘಾ||

yaru tiliyaru ninna bujabalada parakrama

ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ
ಸಮರದೋಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ
ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ
ಹಗಲಿರುಳು ನೆರಳಂತೆ ತಲೆ ಕಾಯ್ದು ಕಾಪಾಡಿ
ಜಯವ ತಂದಿತ್ತ ಆ ಯದುನಂದನ
ಅವನಿಲ್ಲದೆ ಬಂದ ನೀನು ತೄಣಕ್ಕೆ ಸಮಾನ

ಅರ್ಜುನ:
ಅಸಾಹಾಯ ಶೂರ ನಾ ಅಕ್ಷೀಣ ಬಲನೋ
ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ
ಆಗ್ರಹದೊಳೆದುರಾಗೊ ಅರಿಗಳಂ ನಿಗ್ರಹಿಸೋ ವ್ಯಾಘ್ರನಿವನೋ
ಉಗ್ರಪ್ರತಾಪೀ

ಬಭ್ರುವಾಹನ:
ಓ ಹೊ ಒ ಹೋ ಉಗ್ರಪ್ರತಾಪಿ ಆ!
ಸಭೆಯೊಳಗೆ ದ್ರೌಪತಿಯ ಸೀರೆಯನು ಸೆಳೆವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ
ನೂಪುರಂಗಳ ಕಟ್ಟಿ ನಟಿಸಿ ತಕಥೈಯಂದು ನಾಟ್ಯ ಕಲಿಸಿದ ನಪುಂಸಕ ನೀನು
ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ ಮಗನನ್ನು ಬಲಿ ಕೊಟ್ಟ ಭ್ರಷ್ಟಾ ನೀನು
ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೋ
ಖಂಡಿಸಿದೇ ಉಳಿಸುವೆ
ಹೋಗೊ ಹೋಗೆಲೋ ಶಿಖಂಡಿ

ಅರ್ಜುನ:
ಫಡ ಫಡ ಶಿಖಂಡಿಯಂದಡಿಗಡಿಗೆ ನುಡಿಯ ಬೇಡೆಲೋ ಮೂಢ
ಭಂಡರೆದೆ ಗುಂಡಿಗೆಯ ಖಂಡಿಸುತಾ ರಣಚಂಡಿಗೌತಣವೀವ ಈ ಗಾಂಡೀವಿ
ಗಂಡುಗಲಿಗಳ ಗಂಡ ಉದ್ಧಂಡ ಭೂಮಂಡಲದೊಳಖಂಡ ಕೀರ್ತಿ ಪ್ರಚಂಡ

ಬಭ್ರುವಾಹನ:
ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ
ಊಡು ಬಾಣಗಳ ಮಾಡುವೆ ಮಾನಭಂಗ

ಅರ್ಜುನ:
ಕದನದೋಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ

ಬಭ್ರುವಾಹನ:
ಅಬ್ಬರಿಸಿ ಭೊಬ್ಭಿರಿದರಿಲ್ಲಾರಿಗೂ ಭಯವಿಲ್ಲ

ಅರ್ಜುನ:
ಆರ್ಭಟಿಸಿ ಬರುತಿದೆ ನೋಡು ಅಂತಕನ ಆಹ್ವಾನ

ಬಭ್ರುವಾಹನ:
ಅಂತಕನಿಗೆ ಅಂತಕನು ಈ ಬಭ್ರುವಾಹನ

nanna neenu ninna nanu

ನನ್ನ ನೀನು ನಿನ್ನ ನಾನು ಕಾದುಕೊಂಡು ಕೂತುಕೊಂಡ್ರೆ
ಆಸೆಯೂ ಕಳೆಯದೆಂದು ಚಂದಮಾಮ
ಬೇಸಾರ ಕಳೆಯದೆಂದು ಚಂದಮಾಮ
ನನ್ನ ನೀನು ನಿನ್ನ ನಾನು ಕಾದುಕೊಂಡು ಕೂತುಕೊಂಡ್ರೆ
ಆಸೆಯೂ ಕಳೆಯದೆಂದು ಚಂದಮಾಮ
ಬೇಸಾರ ಕಳೆಯದೆಂದು ಚಂದಮಾಮ

ನೀಲಿ ರಂಗು ಪಟ್ಟೆ ಸೀರೆ ಕಟ್ಟಿಕೊಂಡೆ
ಕೆಂಪು ಹಳದಿ ಹೂವ ರವಿಕೆ ತೊಟ್ಟುಕೊಂಡೆ
ನೀಲಿ ರಂಗು ಪಟ್ಟೆ ಸೀರೆ ಕಟ್ಟಿಕೊಂಡೆ
ಕೆಂಪು ಹಳದಿ ಹೂವ ರವಿಕೆ ತೊಟ್ಟುಕೊಂಡೆ
ಮತ್ತೆ ಮಲ್ಲೆ ಹಾಕಿ ಹಾಸಿ ನಿನಗಾಗೆ
ಕಾದಿವ್ನಿ ಬಾರಯ್ಯಾ ತೋಟದೊಳಗೆ
ಜಗನ್ನಾಥ :
ಆಹ್ಚಹಾ..ಆಹ್ಚಹಾ..
ಬರ್ತೀನಿ ಬರ್ತೀನಿ

ನನ್ನ ನೀನು ನಿನ್ನ ನಾನು ಕಾದುಕೊಂಡು ಕೂತುಕೊಂಡ್ರೆ
ಆಸೆಯೂ ಕಳೆಯದೆಂದು ಚಂದಮಾಮ
ಬೇಸಾರ ಕಳೆಯದೆಂದು ಚಂದಮಾಮ

ಎಣ್ಣೆ ತುಂಬ ಒಳ್ಳೇ ಗಂಧ ತುಂಬಿ ನಾನು
ಸಣ್ಣ ಜಾಜಿ ಹೂವ ದಂಡ ಕಟ್ಟಿ ನಾನು
ಎಣ್ಣೆ ತುಂಬ ಒಳ್ಳೇ ಗಂಧ ತುಂಬಿ ನಾನು
ಸಣ್ಣ ಜಾಜಿ ಹೂವ ದಂಡ ಕಟ್ಟಿ ನಾನು
ಹುಣ್ಣಿಮೆ ರಾತ್ರೀಲೀ ಕಾದುಕೊಂಡು
ಕುಂತೀವ್ನೀ ಬಾರಯ್ಯಾ ಮೂಡಿಕೊಂಡು
ಜಗನ್ನಾಥ :
ಆಹ್ಚಹಾ..ಆಹ್ಚಹಾ..
ಬರ್ತೀನಿ ಬರ್ತೀನಿ

ನನ್ನ ನೀನು ನಿನ್ನ ನಾನು ಕಾದುಕೊಂಡು ಕೂತುಕೊಂಡ್ರೆ
ಆಸೆಯೂ ಕಳೆಯದೆಂದು ಚಂದಮಾಮ
ಬೇಸಾರ ಕಳೆಯದೆಂದು ಚಂದಮಾಮ

ತಾಳೆ ಹೂವ ತುರುಬಿನಲ್ಲಿ ಮುಡಿದುಕೊಂಡೆ
ತಂಪು ಕಂಪು ತಾoಬೂಲ ಹಾಕಿಕೊಂಡೆ
ತಾಳೆ ಹೂವ ತುರುಬಿನಲ್ಲಿ ಮುಡಿದುಕೊಂಡೆ
ತಂಪು ಕಂಪು ತಾoಬೂಲ ಹಾಕಿಕೊಂಡೆ
ಮಳೆಗಾಲ.....!
ಮಳೆಗಾಲ ಮಾಡಿ ಇಳಿದು ಬರಲಾರೆ
ಜಗನ್ನಾಥ :
ಮತ್ತೇ..

ನನ್ನ ನೀನು ನಿನ್ನ ನಾನು ಕಾದುಕೊಂಡು ಕೂತುಕೊಂಡ್ರೆ
ಜಗನ್ನಾಥ :
ಆಸೆಯೂ ಕಳೆಯದೆಂದು ಚಂದಮಾಮ
ಬೇಸಾರ ಕಳೆಯದೆಂದು ಚಂದಮಾಮ

nammoora mandara hoove

ನಮ್ಮೂರ ಮಂದಾರ ಹೂವೇ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು |ಪಲ್ಲವಿ|

||ಪಲ್ಲವಿ||
ನಮ್ಮೂರ ಮಂದಾರ ಹೂವೇ

ಕಣ್ಣಲ್ಲಿ ಕರೆದು
ಹೊಂಗನಸ ತೆರೆದು
ಸಂಗಾತಿ ಸಂಪ್ರೀತಿ ಸೆಳೆದೆ

ಅನುರಾಗ ಹೊಳೆದು
ಅನುಬಂಧ ಬೆಳೆದು
ಸಮ್ಮೋಹ ಸಂಬಂಧ ಮಿಡಿದೆ

ಮೂಡಿದ ಪ್ರೇಮದ
ಸೊಗಸಾದ ಕಾರಂಜಿ ಮಿಡಿದೆ

||ಪಲ್ಲವಿ||

ಒಡಲಾಳ ಮೊರೆದು
ಒಡನಾಟ ಮೆರೆದು
ಒಡನಾಡಿ ಬಾಂಧವ್ಯ ಕಂಡೆ

ಋತುಮಾನ ಮೀರಿ
ಹೊಸ ಗಾನ ತೋರಿ
ಹಿತವಾದ ಮಾಧುರ್ಯ ಮಿಂದೆ

ತೀರದ ಮೋಹದ
ಇನಿದಾದ ಆನಂದ ತಂದೆ

jeevaveene

ಜೀವವೀಣೆ ನೀಡು ಮಿಡಿತದ ಸಂಗೀತ
ಭಾವಗೀತೆ ಬಾಳಿನೊಲುಮೆಯ ಸಂಕೇತ

ಇಂದು ಮಿಲನದ ಸಂತೋಷ
ಸುಖ ಸಂತೋಷ
ಶುಭ ಸಂದೇಶ ಸಂದೇಶ ಸಂದೇಶ

ಜೀವವೀಣೆ ನೀಡು ಮಿಡಿತದ ಸಂಗೀತ
ಭಾವಗೀತೆ ಬಾಳಿನೊಲುಮೆಯ ಸಂಕೇತ

ಮಿಡಿಯುವ ಮನಗಳು ಎರಡು
ಮಿಡಿತದ ರಾಗವು ಒಂದೇ
ಮಿಂಚುವ ಕಣ್ಣಂಚಿನ ಸಂಚೂ ಇಂದು ಒಂದೇ
ತಪಿಸುವ ಹೃದಯಗಳೆರಡು
ತಾಪದ ವೇಗವು ಒಂದೇ
ಸೇರುವ ಶುಭ ಸಮಯದಿ ವಿರಹಾ ಇರದು ಮುಂದೆ

ಭಾವಗೀತೆ ಬಾಳಿನೊಲುಮೆಯ ಸಂಕೇತ
ಜೀವವೀಣೆ ನೀಡು ಮಿಡಿತದ ಸಂಗೀತ

ಒಲವಿನ ಬಯಕೆಯು ಅಂದು
ಮಿಲನ ಮಹೋತ್ಸವವಿಂದು
ರಚಿಸುವ ನಾವ್ ಅನುದಿನ ಮುದದಾ ಪ್ರೇಮ ಕವನ
ಕನಸಿನ ರಾತ್ರಿಯು ಕಳೆದು
ಬಂದಿರೆ ನೆನಿಸಿದ ಹಗಲು
ಕಾಣುವ ಹೊಂಬಿಸಿಲಿನ ಸುಖದಾ ಸೂರ್ಯ ಕಿರಣ

ಭಾವಗೀತೆ ಬಾಳಿನೊಲುಮೆಯ ಸಂಕೇತ
ಜೀವವೀಣೆ ನೀಡು ಮಿಡಿತದ ಸಂಗೀತ

ಇಂದು ಮಿಲನದ ಸಂತೋಷ
ಸುಖ ಸಂತೋಷ
ಶುಭ ಸಂದೇಶ ಸಂದೇಶ ಸಂದೇಶ

beladingalagi baa

ಬೆಳದಿಂಗಳಾಗಿ ಬಾ
ಬೆಳದಿಂಗಳಾಗಿ ಬಾ ತಂಗಾಳಿಯಾಗಿ ನಾನು
ಆನಂದವ ನೀಡುವೆ ಒಂದಾಗುವೆ
ಬೆಳದಿಂಗಳಾಗಿ ಬಾ

ಕಣ್ಣಲ್ಲಿ ತುಂಬಿ ಚೆಲುವ
ಎದೆಯಲ್ಲಿ ತುಂಬಿ ಒಲವ
ಬಾಳಲ್ಲಿ ತುಂಬಿದೆ ಉಲ್ಲಾಸವ
ನನ್ನೆದೆಯ ತಾಳ ನೀನು
ನನ್ನುಸಿರ ರಾಗ ನೀನು
ನನ್ನೊಡಲ ಜೀವ ನೀ ಸಂತೋಷವೇ
ನೀನಿಲ್ಲವಾದರೆ ಈ ಪ್ರಾಣ ನಿಲ್ಲದೇ
ನೀನಿಲ್ಲವಾದರೆ ಈ ಪ್ರಾಣ ನಿಲ್ಲದೇ
ಬೆಳದಿಂಗಳಾಗಿ ಬಾ ತಂಗಾಳಿಯಾಗಿ ನಾನು
ಆನಂದವ ನೀಡುವೆ ಒಂದಾಗುವೆ
ಬೆಳದಿಂಗಳಾಗಿ ಬಾ

ಕಾವೇರಿ ತಾಯಿ ನನ್ನ
ಬಾ ಎಂದು ಕೂಗಿ ನಿನ್ನ
ನೀಡಿದಳು ಬಾಳಿಗೆ ಬೆಳಕಾಗಲು
ಆ ದೇವಿ ಆಣೆ ನೀನೆ
ಸಂಗಾತಿ ಕೇಳೆ ಜಾಣೆ
ನೀಡುವೆನು ಭಾಷೆಯ ಬಿಡು ಚಿಂತೆಯ
ಈ ನಮ್ಮ ಪ್ರೇಮಕೆ ನಾ ಕೊಡಲೆ ಕಾಣಿಕೆ
ಈ ನಮ್ಮ ಪ್ರೇಮಕೆ ನಾ ಕೊಡಲೆ ಕಾಣಿಕೆ
ಬೆಳದಿಂಗಳಾಗಿ ಬಾ ತಂಗಾಳಿಯಾಗಿ ನಾನು
ಆನಂದವ ನೀಡುವೆ ಒಂದಾಗುವೆ
ಬೆಳದಿಂಗಳಾಗಿ ಬಾ

oolavina udugore kodalenu

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ

ಪ್ರೇಮ ದೈವದ ಗುಡಿಯಂತೆ
ಪ್ರೇಮ ಜೀವನ ಸುಧೆಯಂತೆ
ಅಂತ್ಯ ಕಾಣದು ಅನುರಾಗ
ಎಂದು ನುಡಿವುದು ಹೊಸ ರಾಗ
ಒಲವು ಸಿಹಿ ನೆನಪು ಸಿಹಿ
ಹೃದಯಗಳ ಮಿಲನ ಸಿಹಿ
ಪ್ರೇಮವೇ ಕವನಾ ಮರೆಯದಿರು

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು

ತಾಜಮಹಲಿನ ಚೆಲುವಲ್ಲಿ
ಪ್ರೇಮ ಚರಿತೆಯ ನೋಡಲ್ಲಿ
ಕಾಳಿದಾಸನ ಪ್ರತಿಕಾವ್ಯ
ಪ್ರೇಮ ಸಾಕ್ಷಿಯು ನಿಜದಲ್ಲಿ
ಕವಿತೆ ಇದಾ ಬರೆದಿರುವೆ
ಹೃದಯವನೆ ಕಳಿಸಿರುವೆ
ಕೋಮಲಾ ಇದು ನೀ ಎಸಯದಿರು

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು

yeneno aase

ಏನೇನೋ ಆಸೆ
ನೀ ತ೦ದಾ ಭಾಷೆ
ಇ೦ದು ಹೊಸತನ ತ೦ದು ತನು ಮನ
ಕೂಗುತಿದೆ ಬಾ ಎ೦ದು ನಿನ್ನ
ಏನೇನೋ ಆಸೆ
ನೀ ತ೦ದಾ ಭಾಷೆ
ಇ೦ದು ಹೊಸತನ ತ೦ದು ತನು ಮನ
ಕೂಗುತಿದೆ ಬಾ ಎ೦ದು ನಿನ್ನ
ಲತೆಗಳು ಬಳುಕುತಿವೆ ನಿನ್ನ೦ತೇ ಆಡಿ
ಸುಮಗಳು ನಗುತಲಿವೆ ನಿನ್ನನ್ನೂ ನೋಡಿ
ಹಿಮದಗಿರಿಯ ಬಳಸಿ ಬರುವ ಗಾಳಿ ತರಲು ಛಳಿ
ಇನಿಯ ಬಳಿಗೆ ಒಲಿದು ಬ೦ದು ಸನಿಹ ತರಲು ಬಿಸಿ
ಏನೇನೋ ಆಸೆ
ನೀ ತ೦ದಾ ಭಾಷೆ
ಇ೦ದು ಹೊಸತನ ತ೦ದು ತನು ಮನ
ಕೂಗುತಿದೆ ಬಾ ಎ೦ದು ನಿನ್ನ
ಕಾಮನ ಬಿಲ್ಲಿ೦ದಾ ಬ೦ದಿತು ನಿನ್ನ೦ದಾ
ತಾರೆಯ ಹೊಳಪಿ೦ದಾ ಬ೦ದಿತು ಕಣ್ಣ೦ದಾ
ಈ ಮಾತು ಬಿಡು ಬಿಡು ಮನಸ್ಸಿಲ್ಲಿ ಇಡು ಇಡು
ಸ೦ತೋಷ ಕೊಡು ಕೊಡು ಬಾ ನಲ್ಲೇ
ಏನೇನೋ ಆಸೆ
ನೀ ತ೦ದಾ ಭಾಷೆ
ಇ೦ದು ಹೊಸತನ ತ೦ದು ತನು ಮನ
ಕೂಗುತಿದೆ ಬಾ ಎ೦ದು ನಿನ್ನ

akashave beelali mele

ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯ್ ಬಿಡಲಿ ಇಲ್ಲೇ ನಾನಿನ್ನ ಕೈ ಬಿಡೆನು
ನೀನಿರುವುದೇ ನನಗಾಗಿ
ಈ ಜೀವ ನಿನಗಾಗಿ ||

ಹೆದರಿಕೆಯ ನೋಟವೇಕೆ ಒಡನಾಡಿ ನಾನಿರುವೆ
ಹೊಸ ಬಾಳಿನ ಹಾದಿಯಲ್ಲಿ ಜೊತೆಗೂಡಿ ನಾ ಬರುವೆ
ಕಲ್ಲಿರಲಿ ಮುಳ್ಳೇ ಇರಲಿ ನಾ ಮೊದಲು ಮುನ್ನಡೆವೆ
ನೀನಡಿಯ ಇರುವೆಡೆಯೇ ಒಲವಿನ ಹೂಹಾಸುವೆ
ಈ ಮಾತಿಗೆ ಮನವೇ ಸಾಕ್ಷಿ ಈ ಭಾಷೆಗೆ ದೇವರೇ ಸಾಕ್ಷಿ
ಇನ್ನಾದರೂ ನನ್ನ ನಂಬಿ ನಗೆಯ ಚೆಲ್ಲು ಚೆಲುವೆ ||

ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯ್ ಬಿಡಲಿ ಇಲ್ಲೇ ನಾನಿನ್ನ ಕೈ ಬಿಡೆನು
ನೀನಿರುವುದೇ ನನಗಾಗಿ
ಈ ಜೀವ ನಿನಗಾಗಿ ||

ಹಸೆಮಣೆಯು ನಮಗೆ ಇಂದು ನಾವ್ ನಿಂತ ತಾಣವು
ತೂಗಾಡುವ ಹಸಿರೆಲೆಯೇ ಶುಭ ಕೋರುವ ತೋರಣವು
ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು
ಈ ನದಿಯ ಕಳರವವೇ ಮಂತ್ರಗಳ ಘೋಷವು
ಸಪ್ತಪದಿ ಈ ನಡೆಯಾಯ್ತು ಸಂಜೆರಂಗು ಆರತಿಯಾಯ್ತು
ಇನ್ನ್ನೀಗ ಎರಡೂ ಜೀವ ಬೇರೆತೂ ಸ್ವರ್ಗವಾಯ್ತು ||

ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯ್ ಬಿಡಲಿ ಇಲ್ಲೇ ನಾನಿನ್ನ ಕೈ ಬಿಡೆನು
ನೀನಿರುವುದೇ ನನಗಾಗಿ
ಈ ಜೀವ ನಿನಗಾಗಿ ||

yenendu na helali

ಏನೆಂದೂ ನಾ ಹೇಳಲಿ
ಮಾನವನಾಸೆಗೆ ಕೊನೆಯೆಲ್ಲಿ
ಕಾಣೋದೆಲ್ಲ ಬೇಕು ಎಂಬ ಹಠದಲ್ಲಿ
ಒಳ್ಳೇದೆಲ್ಲ ಬೇಕು ಎಂಬ ಛಲದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ
ಏನೊಂದೂ ಬಾಳಿಸನು ಜಗದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ
ಏನೊಂದೂ ಬಾಳಿಸನು ಜಗದಲ್ಲಿ
ಏನೆಂದೂ ನಾ ಹೇಳಲಿ
ಮಾನವನಾಸೆಗೆ ಕೊನೆಯೆಲ್ಲಿ

ಜೇನು ಗಳೆಲ್ಲಾ ಅಲೆಯುತ ಹಾರಿ
ಕಾಡೆಲ್ಲ ಕಾಡೆಲ್ಲ ಕಾಡೆಲ್ಲ
ಹನಿಹನಿ ಜೇನು ಸೇರಿಸಲೇನು
ಬೇಕೂ ಎಂದಾಗ ತನದೆನ್ನುವ
ಕೆಸರಿನ ಹೂವು ವಿಷದಾ ಹಾವು
ಭಯವಿಲ್ಲ ಭಯವಿಲ್ಲ ಭಯವಿಲ್ಲ
ಚೆಲುವಿನದೆಲ್ಲ ರುಚಿಸುವುದೆಲ್ಲ
ಕಂಡು ಬಂದಾಗ ಬೇಕೆನ್ನುವ
ಏನೆಂದೂ ನಾ ಹೇಳಲಿ
ಮಾನವನಾಸೆಗೆ ಕೊನೆಯೆಲ್ಲಿ

ಪ್ರಾಣಿಗಳೇನು ಗಿಡಮರವೇನು
ಬಿಡಲಾರ ಬಿಡಲಾರ ಬಿಡಲಾರ
ಬಳಸುವನೆಲ್ಲ ಉಳಿಸುವುದಿಲ್ಲ
ತನ್ನ ಹಿತಕಾಗಿ ಹೋರಾಡುವ
ನುಡಿಯುವುದೊಂದು ನಡೆಯುವುದೊಂದು
ಎಂದೆಂದೂ ಎಂದೆಂದೂ ಎಂದೆಂದೂ
ಪಡೆಯುವುದೊಂದು ಕೊಡುವುದುವೊoದು
ಸ್ವಾರ್ಥಿ ತಾನಾಗಿ ಮೆರೆದಾಡುವ
ಏನೆಂದೂ ನಾ ಹೇಳಲಿ
ಮಾನವನಾಸೆಗೆ ಕೊನೆಯೆಲ್ಲಿ
ಕಾಣೋದೆಲ್ಲ ಬೇಕು ಎಂಬ ಹಠದಲ್ಲಿ
ಒಳ್ಳೇದೆಲ್ಲ ಬೇಕು ಎಂಬ ಛಲದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ
ಏನೊಂದೂ ಬಾಳಿಸನು ಜಗದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ
ಏನೊಂದೂ ಬಾಳಿಸನು ಜಗದಲ್ಲಿ
ಏನೆಂದೂ ನಾ ಹೇಳಲಿ
ಮಾನವನಾಸೆಗೆ ಕೊನೆಯೆಲ್ಲಿ

baluvanta hoove baduva ase yeke (rajkumar)

ಬಾಳುವಂತ ಹೂವೆ ಬಾಡುವ ಆಸೆ ಏಕೆ
ಹಾಡುವಂತ ಕೋಗಿಲೆಯೆ ಅಳುವ ಆಸೆ ಏಕೆ
ಕವಲು ದಾರಿಯಲ್ಲಿ ಬಾಳು ಸಾಧ್ಯವೆ
ಅವಳಿ ದೋಣಿ ಮೇಲೆ ಯಾನ ಯೋಗ್ಯವೇ

ಯಾರಿಗಿಲ್ಲ ನೋವು ಯಾರಿಗಿಲ್ಲ ಸಾವು
ವ್ಯರ್ಥ ವ್ಯಸನದಿಂದ ಸಿಹಿಯು ಕೂಡ ಬೇವು
ಬಾಳು ಒಂದು ಸಂತೆ ಸಂತೆ ತುಂಬ ಚಿಂತೆ
ಮದ್ಯ ಮನಗಳಿನ್ದ ಚಿಂತೆ ಬೇಳೆವುದಂತೆ

ಅಂಖ್ಯೆ ಇರದ ಮನಸನು ದಂಡಿಸುವುದು ನ್ಯಾಯ
ಮೂಖ ಮುಗ್ಧ ದೇಹವ ಹಿಂಸಿಸುವುದು ಹೇಯ
ಸಣ್ಣ ಬಿರುಕು ಸಾಲದೆ ತುಂಬು ದೋಣಿ ತಳ ಸೇರಲು
ಸಣ್ಣ ಅಳುಕು ಸಾಲದೆ ತುಂಬು ಬದುಕು ಬರಡಾಗಲು

ಬಾಳ ಕದನದಲ್ಲಿ ಭರವಸೆಗಳು ಬೇಕು
ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು
ಜೀವರಾಶಿಯಲ್ಲಿ ಮಾನವರಿಗೆ ಆದ್ಯತೆ
ನಾವೆ ಮೂಢರಾದರೆ ಜ್ಞಾನಕೆಲ್ಲಿ ಪೂಜ್ಯತೆ

ಇಲ್ಲಿ ಈಸಬೇಕು ಇದ್ದು ಜಯಿಸಬೇಕು
ನಾಗರಿಕರಾದಮೇಲೆ ಸುಗುಣರಾಗಬೇಕು
ನಿನ್ನ ಹಳದಿ ಕಣ್ಣಲಿ ಜನರನೇಕೆ ನೀ ನೋಡುವೆ